ಎರಡೆಳೆ ದಾರ

ಎರಡಳೆ ದಾರವು ಬುಡದೊಳಗಿರುವಾಗ
ಹರವಿಕೊಂಡಿದೆ ಬಲೆಯು ಬಿಡಿಸದ ಗಂಟು
ಬಿಡಿಸಿಕೊಳ್ಳುವೆನೆಂದು ಹೆಣಗುವ ಮಾನವ
ತೊಡರಿಕೊಂಡಿಲ್ಲಿಯೆ ಕೊಳೆಯುವನು ಸಿಕ್ಕು

ಹುಟ್ಟಿ ಬಂದುದಕಾಗಿ ಹೊಟ್ಟೆ ಕೊಟ್ಟಿಹ ಶಿವನು
ಹುಟ್ಟಿದ ಸೂರ್ಯನು ಮುಳುಗುವವರೆಗೆ
ಅದನು ತುಂಬಿಸಲಿಕ್ಕೆ ಕಷ್ಟಗಳ ಪಡುವನು
ಮನೆ ಮಠ ವಸ್ತ್ರಾಭರಣವು ಮೇಲೆ

ತನ್ನಯ ವಂಶವು ಮುಂಬರಿಯಬೇಕೆಂದು
ಹೆಣ್ಣು ಗಂಡುಗಳೆಂಬ ಧ್ರುವಗಳ ಹೂಡಿ
ಬಲು ದೊಡ್ಡ ಬಲೆಯನ್ನೆ ನೇಯ್ದಿರುವ ನೋಡಿ
ಬೆರೆಯಲಿರುವುದರಲ್ಲಿ ತೀರೆರಡು ತಮ್ಮ

ಬಾಯೊಂದು ಉಣಲಿಕ್ಕೆ ಬೇರೊಂದು ವಂಶಕ್ಕೆ
ಈಯೆರಡ ಸುದ್ದಾಗಿ ಇಡಬೇಕು ಮುಖ್ಯ
ವೇದಶಾಸ್ತ್ರಾಗಮ ವಿಶ್ವವಿಜ್ಞಾನವ
ಓದಿಲ್ಲ ನಮಗಿಲ್ಲ ಸಂಪೂರ್ಣ ವಿದ್ಯೆ

ಲೌಕಿಕದೊಳಗೆ ಒಳಿತಾಗಿ ಬಾಳಲು
ಸಾಕೇಳು ಈ ಬಲೆಯ ಬಿಡಿಸುವ ವಿದ್ಯೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿತಿ
Next post ಮೌಲ್ಯಮಾಪನ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys